ಅಮೃತ ಮಂಥನ

ಪುರಾಣ, ಕಾವ್ಯವೊ, ಕಲ್ಪದ್ರುಮವೊ
ಯುಗದ ಪೂರ್ವದ ನಾಕ-ನರಕವೊ
ಜನನ ಮರಣವ ಗೆಲುವ ಸಮರವು
ಸುರಾಸುರರ ಸಮರದ ಪರಿಪಾಠವು |

ನಿತ್ಯ ನಡೆದಿದೆ
ಮಥನ-ಮಂಥನ
ಉಳಿವಳಿವು ಬೆಳೆವೊಳಪಿನ ಸಂಚಿಗೆ
ಶಸ್ತ್ರ-ಶಾಸ್ತ್ರ ಹಿಡಿದ
ಸಮ್ಮೋಹ ಮಾಯೆಯ
ಮುಖವಾಡದೊಳಗಿನ ಸುಖ ಬದುಕಿಗೆ |

ಮಥಿಸಲುದಿಸಿದಮೃತವದೆಲ್ಲವು
ಸುರರ ಕಂಗಳ ಭಾಗ್ಯಕೆ ಹಬ್ಬವು
ಸುರೆಯಮಲಲಿ ಹರಿದ ಬೆವರಿಗೆ
ಸಾವ ಶೂಲ ಪಾಶ ಕಲಹದ ಬೀಜವು |

ಹೆಜ್ಜೆ ಇಡುತಿದೆ,
ಮುಂಡವಿರದ ರುಂಡದ,
ರಾಹುಕೇತುಛಲ ಬಾನೆದೆ ಗೂಡಿಗೆ
ಶಸ್ತ್ರ ಶಾಸ್ತ್ರ ಹಿಡಿದ
ಜಗದೆದೆಯನಲುಗಿಸೋ
ಮುಖವಾಡ ತೆರೆಮರೆ ಸಂಚ ಸಂಚಿಗೆ |

ಯುಗ ಯುಗದ ಸಂಭದವತಾರಿ ದೇವರ
ಛದ್ಮ ವೇಷದ ರಂಗು ರಂಗದ ಸಜ್ಜಿಕೆ
ಮುಗುದ ಕಂಗಳೊಡಲ ವಾಸಿಯವನಿಗೂ
ವೇಷಾಂಬರ ವೇಷದ ಭೂಮಿಕೆ |

ಕಾರಿರುಳಗಣ್ಣಲಿ ಗೆಲುವ ಛಲದಲಿ
ಸಾಗಿದೆ ಪಯಣ ಉನ್ಮತ್ತ ದಿಕ್ಕಿಗೆ
ಗೊತ್ತು-ಗುರಿಯ ಪರಿವೆ-ತೊರೆದ
ಮುಖವಾಡ ಮಸಣದ ಹೊಗೆ ಧಗೆ ನಗೆ |
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ವಸಂತ
Next post ತೂಗುತಿದೆ ಉಯ್ಯಾಲೆ

ಸಣ್ಣ ಕತೆ

  • ಮಿಂಚಿನ ದೀಪ

    ಸಂಜೆ ಮೊಗ್ಗೂಡೆದಿತ್ತು. ಆಕಾಶದ ತುಂಬೆಲ್ಲಾ ಬಣ್ಣದ ಬಾಟಲಿ ಉರುಳಿಸಿದ ಹಾಗೆ ಕೆಂಪು, ನೀಲಿ ಬಣ್ಣ ಚೆಲ್ಲಿ, ಚಳಿಗಾಲದ ಸಂಜೆಯ ಮಬ್ಬಿನ ತೆಳುಪರದೆಯ ‘ಓಡಿನಿ’ ಎಲ್ಲವನ್ನೂ ಸುತ್ತುವಂತೆ ಪಸರಿಸಿಕೊಂಡಿತ್ತು.… Read more…

  • ನಂಬಿಕೆ

    ಮಧ್ಯರಾತ್ರಿ ನಿದ್ದೆಯಿಂದ ಎಚ್ಚೆತ್ತ ಕಾದ್ರಿ ಒಮ್ಮೆ ಎಡಕ್ಕೆ ಮತ್ತೊಮ್ಮೆ ಬಲಕ್ಕೆ ಹೊರಳಾಡಿದ. ಹೂ... ಹೂ.... ನಿದ್ರೆ ಬರಲಾರದು. ಎದ್ದು ಕುಳಿತು ಪಕ್ಕದ ಚಾಪೆಯತ್ತ ಕಣ್ಣಾಡಿಸಿದ ಪಾತು ಅವನ… Read more…

  • ಜಡ

    ಮಾರಯ್ಯನನ್ನು ಅವನ ಹಳ್ಳಿಯಲ್ಲಿ ಹಲವರು ಹಲವು ಹೆಸರುಗಳಿಂದ ಕರೆಯುತ್ತಿದ್ದರು. ಹಾಗಾಗಿ ಅವನ ನಿಜವಾದ ಪೂರ್ತಿ ಹೆಸರು ಮಾರಯ್ಯನೆಂಬುವುದು ಸಮಯ ಬಂದಾಗ ಅವನಿಗೆ ಒತ್ತಿ ಹೇಳಬೇಕಾಗಿ ಬರುತ್ತಿತ್ತು. ಅಂತಹ… Read more…

  • ದೇವರು

    ನನ್ನ ದೇವರಿಗೆ, ಬಹಳ ದಿನಗಳ ನಂತರ ನಿಮಗೆ ಕಾಗದ ಬರೆಯುತ್ತಿದ್ದೇನೆ. ಏಕೆಂದರೆ ನೀವು ಬರೆದ ಕಾಗದಕ್ಕೆ ಉತ್ತರ ಕೇಳಿದ್ದೀರಿ. ನಾನೀಗ ಉತ್ತರ ಬರೆಯಲೇಬೇಕು ಬರೆಯುತ್ತಿದ್ದೇನೆ. "ಪತಿಯೇ ದೇವರು"… Read more…

  • ಗ್ರಹಕಥಾ

    [ಸತಿಯು ಪತಿಯ ಹಾಗೂ ಪತಿಯು ಸತಿಯ ಮನೋವೃತ್ತಿಗಳನ್ನು ಅರಿತು ಪರಸ್ಪರರು ಪರಸ್ಪರರನ್ನು ಸಂತೋಷಗೊಳಿಸಿದರೆ ಮಾತ್ರ ಸಂಸಾರವು ಉಭಯತರಿಗೂ ಸುಖಮಯವಾಗುತ್ತದೆ ಹೊರತಾಗಿ, ಅವರಲ್ಲಿ ಯಾರಾದರೊಬ್ಬರು ಅಹಂಭಾವದಿಂದ ಪ್ರೇರಿತರಾಗಿ, ಪರರ… Read more…

cheap jordans|wholesale air max|wholesale jordans|wholesale jewelry|wholesale jerseys